ಸುಳ್ಯ: ಕಾರು ಮತ್ತು ಆಟೋ ರಿಕ್ಷಾ ನಡುವೆ ಅಪಘಾತ ಸಂಭವಿಸಿದ ಘಟನೆ ಸುಳ್ಯದಲ್ಲಿ ನಡೆದಿದೆ.
ಸುಳ್ಯದಿಂದ ಜಯನಗರಕ್ಕೆ ಹೋಗುತ್ತಿದ್ದ ಆಟೋರಿಕ್ಷಾ ಹಳೆಗೇಟು ಸಮೀಪ ಜಯನಗರ ಕಡೆಗೆ ತಿರುಗುವಾಗ ಹಿಂಬದಿಯಿಂದ ಬಂದ ಕಾರು ತಕ್ಷಣ ನಿಲ್ಲಿಸಿದ್ದಾರೆ.
- Advertisement -
ಈ ವೇಳೆ ಹಿಂದಿನಿಂದ ಬಂದ ಮತ್ತೊಂದು ಕಾರು ಈ ಕಾರಿಗೆ ಗುದ್ದಿದ ಪರಿಣಾಮ ಎದುರು ಭಾಗದಲ್ಲಿ ಇದ್ದ ಕಾರು ಆಟೋರಿಕ್ಷದ ಹಿಂದಿನ ಭಾಗಕ್ಕೆ ಡಿಕ್ಕಿ ಹೊಡೆದ ಕಾರಣದಿಂದ ಮೂರು ವಾಹನಗಳು ಜಖಂಗೊಂಡಿವೆ. ಘಟನೆಯಿಂದ ವಾಹನದಲ್ಲಿದ್ದ ಯಾರಿಗೂ ಕೂಡ ಪ್ರಾಣಾಪಾಯ ಸಂಭವಿಸಲಿಲ್ಲ.
ಆಟೋರಿಕ್ಷಾದ ಹಿಂಭಾಗದಲ್ಲಿದ್ದ ಕಾರು ಗುತ್ತಿಗಾರು ಗ್ರಾಮದ ಅಡಿಕೆ ವ್ಯಾಪಾರಸ್ಥರಾಗಿದ್ದು, ಹಿಂದಿನಿಂದ ಡಿಕ್ಕಿ ಹೊಡೆದ ಕಾರು ಕೊಡಗು ಜಿಲ್ಲೆ ಕುಶಾಲನಗರ ಮೂಲದ ವರಾಗಿದ್ದು ಅವರು ಪಣೋಲಿಬೈಲು ಕ್ಷೇತ್ರಕ್ಕೆ ಹೋಗುವವರಾಗಿದ್ದರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಇದೀಗ ಮೂರು ವಾಹನಗಳ ಚಾಲಕರನ್ನು ಮತ್ತು ವಾಹನಗಳನ್ನು ಠಾಣೆಗೆ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ.