Home ಕ್ರೈಂ ಸುದ್ದಿ ಗಂಗಾವತಿ: ಕಾಲುವೆಯ ಕೆರೆಯಲ್ಲಿ ಜಂಪಿಂಗ್ ಮಾಡಲು ಹೋಗಿ ಓರ್ವ ಮೃತ್ಯು, ಮತ್ತೋರ್ವ ನಾಪತ್ತೆ

ಗಂಗಾವತಿ: ಕಾಲುವೆಯ ಕೆರೆಯಲ್ಲಿ ಜಂಪಿಂಗ್ ಮಾಡಲು ಹೋಗಿ ಓರ್ವ ಮೃತ್ಯು, ಮತ್ತೋರ್ವ ನಾಪತ್ತೆ

ಗಂಗಾವತಿ: ಬೇಸಿಗೆಯಲ್ಲಿ ತಾಲ್ಲೂಕಿನ ಸಣಾಪುರ ಎಡದಂಡೆ ಕಾಲುವೆಯ ಕೆರೆಯಲ್ಲಿ ಜಂಪಿಂಗ್ ಮಾಡಲು ಹೋಗಿ ಇಬ್ಬರೂ ಹೈದರಾಬಾದ್ ಮೂಲದ ಐಟಿ ಬಿಟಿ ಉದ್ಯೋಗಿಗಳು ನಾಪತ್ತೆಯಾಗಿರುವ ಘಟನೆ ಸೋಮವಾರ ಬೆಳಗಿನಜಾವ ಜರುಗಿದೆ.

- Advertisement -

ಹೈದರಾಬಾದ್ ಮೂಲದ ಕೆ.ಆರ್.ಪುರಂ ನಿವಾಸಿಗಳಾದ ಮಧುಕಿರಣ್ (25) ಹಾಗೂ ರಾಜೇಶ್ ಕುಮಾರ್ (26) ಸಂಗಾಪುರ ಹತ್ತಿರವಿರುವ ಮೇಘರಾಜ್ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದರು. ಸೋಮವಾರ ಬೆಳಿಗ್ಗೆ ಸಣಾಪುರ ಕೆರೆಯಲ್ಲಿ ಈಜಾಡಲು ತೆರಳಿದ್ದ ಸಂದರ್ಭದಲ್ಲಿ ಕಲ್ಲಿನ ಮೇಲಿಂದ ಜಂಪಿಂಗ್ ಮಾಡುವ ಸಂದರ್ಭದಲ್ಲಿ ಇಬ್ಬರೂ ನೀರಿನಲ್ಲಿ ನಾಪತ್ತೆಯಾಗಿದ್ದಾರೆ.

- Advertisement -

ಸ್ಥಳಕ್ಕೆ ಪೊಲೀಸ್, ಗೃಹರಕ್ಷಕ ದಳ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮತ್ತೆ ಕರೆದು ತೊಡಗಿದ್ದಾರೆ. ರಾಜೇಶ್ ಕುಮಾರ್ ಮೃತದೇಹ ಪತ್ತೆಯಾಗಿದ್ದು ಇನ್ನೂ ಮಧುಕಿರಣ್ ಪತ್ತೆಯಾಗಿಲ್ಲ.

- Advertisement -

ದಸರಾ ಹಬ್ಬದ ನಿಮಿತ್ತ ಸಾಲುಸಾಲು ರಜೆಗಳು ಬಂದಿರುವುದರಿಂದ ಆನೆಗೊಂದಿ ಕಿಷ್ಕಿಂದೆ ಭಾಗದ ಪ್ರಕೃತಿ ಸೌಂದರ್ಯ ಮತ್ತು ಅಂಜನಾದ್ರಿಬೆಟ್ಟ ವೀಕ್ಷಣೆಗೆ ಆಗಮಿಸಿದ್ದರು.

- Advertisment -

Most Popular