Home ಕ್ರೈಂ ಸುದ್ದಿ ಉತ್ತರ ಪ್ರದೇಶ: ನ್ಯಾಯಾಲಯದೊಳಗೆ ವಕೀಲನನ್ನು ಗುಂಡಿಕ್ಕಿ ಹತ್ಯೆ:ಆರೋಪಿ ಪರಾರಿ

ಉತ್ತರ ಪ್ರದೇಶ: ನ್ಯಾಯಾಲಯದೊಳಗೆ ವಕೀಲನನ್ನು ಗುಂಡಿಕ್ಕಿ ಹತ್ಯೆ:
ಆರೋಪಿ ಪರಾರಿ

ಲಖನೌ: ಉತ್ತರಪ್ರದೇಶದ ಶಹಜಹಾನ್ ಪುರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದೊಳಗೆ ವಕೀಲರೊಬ್ಬರಿಗೆ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಸೋಮವಾರ ವರದಿಯಾಗಿದೆ. ಕೊಲೆಯ ನಂತರ ಆರೋಪಿಗಳು ಆತನನ್ನು ಕೊಂದು ಪರಾರಿಯಾಗಿದ್ದಾರೆ. ಈ ಘಟನೆ ಇಡೀ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಘಟನೆ ವರದಿಯಾದ ತಕ್ಷಣ ಡಿಎಂ-ಎಸ್ಪಿ ಭಾರೀ ಪೊಲೀಸ್ ಬಲದೊಂದಿಗೆ ಸ್ಥಳಕ್ಕೆ ಧಾವಿಸಿದರು.

- Advertisement -

ಶಹಜಹಾನ್ ಪುರದ ಈದ್ಗಾ ಬೀದಿಯ ನಿವಾಸಿ ವಕೀಲ ಭೂಪೇಂದ್ರ ಪ್ರತಾಪ್ ಸಿಂಗ್ (36) ಮೃತಪಟ್ಟ ವ್ಯಕ್ತಿ. ಭೂಪೇಂದ್ರ ಸಿಂಗ್ ಅವರ ಮೃತದೇಹ ಸೋಮವಾರ ನ್ಯಾಯಾಲಯದ ಮೂರನೇ ಮಹಡಿಯಲ್ಲಿ ಪತ್ತೆಯಾಗಿದೆ. ದಾಖಲೆಗಳನ್ನು ಪರಿಶೀಲಿಸಲು ಭೂಪೇಂದ್ರ ಮೂರನೇ ಮಹಡಿಯ ರೆಕಾರ್ಡ್ ರೂಮಿಗೆ ಹೋಗಿದ್ದಾರೆ ಎಂದು ಹೇಳಲಾಗಿದೆ. ಇಲ್ಲಿ ಹೆಚ್ಚಿನ ಜನರ ಓಡಾಟವಿಲ್ಲ. ಮಧ್ಯಾಹ್ನ 12.15 ರ ಸುಮಾರಿಗೆ ದುಷ್ಕರ್ಮಿಗಳು ಭೂಪೇಂದ್ರನನ್ನು ಚಾಕುವಿನಿಂದ ಹೊಡೆದು ಪರಾರಿಯಾಗಿದ್ದಾರೆ. ಮೃತದೇಹದ ಬಳಿ ದೇಶೀಯ ನಿರ್ಮಿತ ಪಿಸ್ತೂಲ್ ಕೂಡ ಕಂಡುಬಂದಿದೆ ಎಂದು ವರದಿಯಾಗಿದೆ.

- Advertisement -

ಹತ್ಯೆಗೆ ಪ್ರಮುಖ ಕಾರಣಗಳು ತಿಳಿದುಬಂದಿಲ್ಲ. ಘಟನೆ ಬಳಿಕ ಸ್ಥಳಕ್ಕಾಗಮಿಸಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ಆರಂಭಿಸಿದ್ದಾರೆಂದು ತಿಳಿದುಬಂದಿದೆ. ಜಿಲ್ಲಾಧಿಕಾರಿ ಇಂದ್ರ ವಿಕ್ರಮ್ ಸಿಂಗ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಎಸ್ ಆನಂದ್ ಕೂಡ ಸ್ಥಳಕ್ಕೆ ಧಾವಿಸಿದ್ದಾರೆ.

- Advertisement -
- Advertisment -

Most Popular