Home ಕಾನೂನು ಮಾಹಿತಿ ಕೋಮು ವೈಷಮ್ಯ, ಪ್ರಚೋದನಕಾರಿ ಭಾಷಣ: ಚೈತ್ರಾ ವಿರುದ್ಧ ದೂರು ದಾಖಲು

ಕೋಮು ವೈಷಮ್ಯ, ಪ್ರಚೋದನಕಾರಿ ಭಾಷಣ: ಚೈತ್ರಾ ವಿರುದ್ಧ ದೂರು ದಾಖಲು

ಮಂಗಳೂರು: ಸುರತ್ಕಲ್ ಅ.5 ರಂದು ಬಜರಂಗದಳ ಆಯೋಜಿಸಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಚೈತ್ರಾ ಕುಂದಾಪುರ ಕೋಮು ವೈಷಮ್ಯ ಹೆಚ್ಚಿಸುವ ಪ್ರಚೋಧನಕಾರಿ ಭಾಷಣ ಹಾಗೂ ಕೋಟಿ- ಚೆನ್ನಯರ ಆಯುಧವನ್ನು ರೌಡಿಗಳು ಬಳಸುವ ತಲವಾರಿಗೆ ಹೋಲಿಸಿ ಪವಿತ್ರ ನಂಬಿಕೆಗೆ ಘಾಸಿ ಉಂಟು ಮಾಡಿದ್ದಾರೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಕಾಂಗ್ರೆಸ್ ಸಂಯೋಜಕರಾದ ಬಂಟ್ವಾಳದ ಬೊಂಡಾಲ ಚಿತ್ತರಂಜನ್ ಶೆಟ್ಟಿ ಅವರು ಸುರತ್ಕ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

ಒಂದು ಕೋಮಿನವರನ್ನು ಎತ್ತಿ ಕತ್ತುವ ಕೋಮು ದ್ವೇಷ ಹರಡುವ ಭಾಷಣ ಮಾಡಿದ್ದಾರೆ ಇದರಿಂದ ಕಾನೂನು ಸುವ್ಯವ್ಸ್ಥೆಗೆ ಧಕ್ಕೆ ಆಗಲಿದ್ದು ಈಕೆಯ ಹಾಗೂ ಬಜರಂಗದಳ ಸಂಘಟಕರ ವಿರುದ್ದ ಕೇಸು ದಾಖಲಿಸಬೇಕು. ಇದರ ಜೊತೆಗೆ ಕಾಂಗ್ರೆಸ್ ಮುಖಂಡರ ವೈಯಕ್ತಿಕ ವಿಚಾರವನ್ನು ಪ್ರಸ್ತಾಪಿಸಿ ಅವಮಾನ ಮಾಡಿದ್ದಾರೆ. ಈ ಬಗ್ಗೆ ಕಠಿಣ ಕ್ರಮ ಜರಗಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

- Advertisement -
- Advertisment -

Most Popular