Home ನಮ್ಮ ರಾಜ್ಯ ದಾವಣಗೆರೆ: ಕಾರು ಹರಿದು ಮಗು ಮೃತ್ಯು, ಗರ್ಭಿಣಿ ಗೆ ಗಾಯ

ದಾವಣಗೆರೆ: ಕಾರು ಹರಿದು ಮಗು ಮೃತ್ಯು, ಗರ್ಭಿಣಿ ಗೆ ಗಾಯ

ದಾವಣಗೆರೆ: ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದ ಕಾರು ಮಗುವಿನ ಮೇಲೆ ಹರಿದ ಪರಿಣಾಮ ಮಗು ಸಾವನ್ನಪ್ಪಿ, ಜೊತೆಗೆ ಗರ್ಭಿಣಿಗೆ ಗಾಯವಾದ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಡೆದಿದೆ.

- Advertisement -

ನಾಲ್ಕು ವರ್ಷದ ಹನುಮಂತ ಎಂಬ ಮಗು ಮೃತಪಟ್ಟಿದೆ. ಅಜಾಗರೂಕತೆಯಿಂದ ಸರಕಾರಿ ಆಸ್ಪತ್ರೆಯ ನೌಕರ ರವಿ ಕಾರು ಚಾಲನೆ ಮಾಡಿಕೊಂಡು ಬಂದಿದ್ದಾನೆ. ಈ ಹಿನ್ನೆಲೆಯಲ್ಲಿ ದುರ್ಘಟನೆ ಸಂಭವಿಸಿದೆ. ಘಟನೆ ಸಂಬಂಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
- Advertisment -

Most Popular