Home ನಮ್ಮ ಕರಾವಳಿ ಕಲ್ಲಡ್ಕ ಅನುಗ್ರಹ ಸಂಸ್ಥೆಗೆ ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಯಾಸೀನ್ ಬೇಗ್ ಆಯ್ಕೆ

ಕಲ್ಲಡ್ಕ ಅನುಗ್ರಹ ಸಂಸ್ಥೆಗೆ ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಯಾಸೀನ್ ಬೇಗ್ ಆಯ್ಕೆ

ಕಲ್ಲಡ್ಕ:- ಅನುಗ್ರಹ ವಿಮೆನ್ಸ್ ಕಾಲೇಜಿನ ಆಡಳಿತ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಆಗಸ್ಟ್ 15ರಂದು ಸ್ವಾತಂತ್ರ್ಯದಿನದ ಧ್ವಜಾರೋಹಣದ ಬಳಿಕ ಅನುಗ್ರಹ ಕಾಲೇಜಿನಲ್ಲಿ ನಡೆದ ಟ್ರಸ್ಟಿನ ಮಹಾಸಭೆಯಲ್ಲಿ ನಡೆಯಿತು.

- Advertisement -

ಮೌಲಾನಾ ಯಹ್ಯಾ ತಂಙಲ್ ಮದನಿಯವರು ಉದ್ಘಾಟಿಸಿದರು.

- Advertisement -

ಜI ಮುಕ್ತಾರ್ ಅಹ್ಮದ್ ಸ್ವಾಗತಿಸಿ ಜI ಯಾಸೀನ್ ಬೇಗ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತದನಂತರ ಕಳೆದ ಎರಡು ವರ್ಷಗಳ ವರದಿಯನ್ನು ಪ್ರಧಾನ ಕಾರ್ಯದರ್ಶಿ ಮತ್ತು ಆಯ-ವ್ಯಯ ಲೆಕ್ಕಾಚಾರವನ್ನು ಖಜಾಂಚಿ ಯವರು ಮಂಡಿಸಿದರು. ಕೆಲವೊಂದು ತಿದ್ದುಪಡಿಯೊಂದಿಗೆ ವರದಿಗಳನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ನಂತರ ನಡೆದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಮಂಗಳೂರು ವಲಯ ಸಂಚಾಲಕ ಮತ್ತು ಕಾರ್ಯದರ್ಶಿಯವರು ನಡೆಸಿಕೊಟ್ಟರು.

- Advertisement -

ಜI ಯಾಸೀನ್ ಬೇಗ್ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಜI ಇಸ್ಹಾಕ್ ಎಸ್.ಎಫ್ ಅವರು ಮರು ಆಯ್ಕೆಗೊಂಡರು. ಇನ್ನೋರ್ವ ಉಪಾಧ್ಯಕ್ಷರಾಗಿ ಇಮಾರತ್ ಅಲಿ ಕಲ್ಲಡ್ಕ ಅವರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಜI ಶಾಹುಲ್ ಹಮೀದ್ ಪರ್ಲಿಯ ಮತ್ತು ಜತೆ ಕಾರ್ಯದರ್ಶಿ ಯಾಗಿ ಜI ಸುಲೈಮಾನ್ ಅಪೋಲೋ ಕಲ್ಲಡ್ಕ ಅವರನ್ನು ಆಯ್ಕೆ ಮಾಡಲಾಯಿತು. ಜI ಹೈದರ್ ಅಲಿ ವಿಟ್ಲ ಖಜಾಂಚಿಯಾಗಿ ಮತ್ತು ಸಂಚಾಲಕರಾಗಿ ಜI ಅಮಾನುಲ್ಲಾಖಾನ್ ಮರು ಆಯ್ಕೆಗೊಂಡರು. ಮಹಾಸಭೆಯ ಅಧ್ಯಕ್ಷತೆ ವಹಿಸಿದ ಗೌರವಾನ್ವಿತ ಜI ಕೆ.ಎಂ.ಶರೀಫ್ ಸಾಹಬ್ ಸಮಾರೋಪವಾಗಿ ಕೆಲವು ಹಿತನುಡಿಗಳನ್ನಾಡಿದರು. ಕೊನೆಯಲ್ಲಿ ಮೌಲಾನಾ ಯಹ್ಯಾ ತಂಙಳ್ ರವರ ದುವಾ ದೊಂದಿಗೆ ಸಭೆ ಮುಕ್ತಾಯಗೊಂಡಿತು.

- Advertisment -

Most Popular