Home ನಮ್ಮ ರಾಜ್ಯ ವ್ಯಾಪಕ ಟ್ರೋಲ್: ಇತ್ತೀಚೆಗಷ್ಟೇ ಆರಂಭವಾಗಿದ್ದ ಕನ್ನಡ ಧಾರಾವಾಹಿ ಮುಕ್ತಾಯ

ವ್ಯಾಪಕ ಟ್ರೋಲ್: ಇತ್ತೀಚೆಗಷ್ಟೇ ಆರಂಭವಾಗಿದ್ದ ಕನ್ನಡ ಧಾರಾವಾಹಿ ಮುಕ್ತಾಯ

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಇತ್ತೀಚೆಗಷ್ಟೇ ಆರಂಭವಾಗಿದ್ದ ‘ಲಗ್ನ ಪತ್ರಿಕೆ’ ಧಾರಾವಾಹಿ ಮುಕ್ತಾಯವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

- Advertisement -

‘ಲಗ್ನ ಪತ್ರಿಕೆ’ ಕೆಲ ದಿನಗಳ ಹಿಂದೆ ಈ ಸೀರಿಯಲ್ ಹಾಗೂ ಇದರ ನಾಯಕ-ನಾಯಕಿ ಬಗ್ಗೆ ಟ್ರೋಲ್ ಮಾಡಲಾಗಿತ್ತು. ‘ಲಗ್ನಪತ್ರಿಕೆ’ ಧಾರಾವಾಹಿಯ ಹೀರೋ-ಹೀರೋಯಿನ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಕಾಮೆಂಟ್ ಮಾಡಲಾಗಿತ್ತು.

- Advertisement -

ಹೀರೋಯಿನ್ ಮೇಕಪ್ ಅತಿಯಾಯ್ತು, ಹೀರೋ-ಹೀರೋಯಿನ್‌ಗೆ ಅಭಿನಯ ಬರಲ್ಲ. ಇವರನ್ನು ಬದಲಾಯಿಸಿ ಅಂತ ಅನೇಕ ಕಾಮೆಂಟ್‌ಗಳು ಬಂದಿದ್ದವು.
ಉಳಿದ ಧಾರಾವಾಹಿಗಳಿಗೆ ಹೋಲಿಸಿದರೆ ಇಲ್ಲಿನ ನಟ-ನಟಿಯರು ವೀಕ್ಷಕರಿಗೆ ಇಷ್ಟವಾಗಿಲ್ಲ ಎನ್ನಲಾಗಿತ್ತು.

- Advertisement -

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ನಿರ್ಮಾಪಕ ಅರವಿಂದ್ ಕೌಶಿಕ್, ನಾವು ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳೋದಿಲ್ಲ ಎಂದಿದ್ದರು.
ಇನ್ನೊಂದಡೆ ಟಿಆರ್‌ಪಿ ಕಾರಣದಿಂದಾಗಿ ಈ ಸೀರಿಯಲ್ ಅಂತ್ಯವಾಗುತ್ತಿದೆ ಎಂದು ಕಾರಣ ಹೇಳಲಾಗುತ್ತಿದೆ.

- Advertisment -

Most Popular