ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕಡವಿನಬಾಗಿಲಿನಲ್ಲಿ ಎಸ್.ಡಿ ಪಿ.ಐ ಪಕ್ಷದ ಬ್ಯಾನರ್ ಹರಿದು ಹಾಕಿದ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ.
ಎಸ್ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಸಮಿತಿಗೆ ಆಯ್ಕೆಯಾದ ನೂತನ ನಾಯಕರುಗಳಿಗೆ ಶುಭಕೋರಿ ಅಭಿನಂದನೆ ಸಲ್ಲಿಸುವ ಸಲುವಾಗಿ ಅಳವಡಿಸಿದ ಬ್ಯಾನರನ್ನು ಯಾರೋ ಕಿಡಿಗೇಡಿಗಳು ಹರಿದು ಹಾಕಿ ಹಾನಿಗೊಳಿಸಿದ್ದು, ಅಶಾಂತಿಯನ್ನು ಸೃಷ್ಠಿಸುವ ಉದ್ದೇಶದಿಂದ ಕಿಡಿಗೇಡಿಗಳು ಈ ರೀತಿಯ ಕೃತ್ಯದ ಮೂಲಕ ವಿಘ್ನ ಸಂತೋಷವನ್ನು ಪಡುತ್ತಿದ್ದಾರೆ ಎನ್ನಲಾಗಿದೆ.
- Advertisement -
ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಇಳಂತಿಲ ಎಸ್ಡಿಪಿಐ ಸಮಿತಿಯ ಅಧ್ಯಕ್ಷರು ಪೊಲೀಸ್ ದೂರನ್ನು ನೀಡಿದ್ದು ಆರೋಪಿಗಳನ್ನು ಪತ್ತೆಹಚ್ಚುವಂತೆ ಆಗ್ರಹಿಸಿದ್ದಾರೆ.