ಬೆಳಗಾವಿ: ಸೋಂಕಿನ ಸಂಖ್ಯೆ ನಿಯಂತ್ರಣಕ್ಕೆ ಬಂದರೆ ಮಾತ್ರ ಹತ್ತನೆಯ ತರಗತಿಯ ಪರೀಕ್ಷೆ ನಡೆಸುತ್ತೆವೆ. ಒಂದು ವೇಳೆ ಕೊರೋನಾ ಸುಧಾರಣೆ ಆಗದಿದ್ದರೆ ಪರೀಕ್ಷೆ ನಡೆಸುವುದಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಠನೆ ನೀಡಿದ್ದಾರೆ.
ಪರೀಕ್ಷೆಯ ನಿರ್ಧಾರ ಒಂದು ತಾತ್ಕಾಲಿಕ ಮುಂದಿನ ಹಂತದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಾರದೆ ಮೂರನೇ ಅಲೆಯ ಚಿತ್ರಣಗಳು ಇರುವುದರಿಂದ ಆ ಸಂದರ್ಭಕ್ಕೆ ಅನುಗುಣವಾಗಿ ನಾವು ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೇವೆ. ಕೊರೋನಾ ಸಾವಿನ ಸಂಖ್ಯೆ ನಿಯಂತ್ರಣಕ್ಕೆ ಬಂದು ಕೊರೋನಾ ಹತೋಟಿಗೆ ಬಂದರೆ ಮಾತ್ರ ಪರೀಕ್ಷೆ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.