ವಿಟ್ಲ: ಕಲ್ಲಿನ ಕೋರೆಗೆ ನುಗ್ಗಿ ಬೆದರಿಕೆ ಹಾಕಿದ ವಿಚಾರದಲ್ಲಿ ಓರ್ವನನ್ನು ಬಂಧಿಸುವಲ್ಲಿ ವಿಟ್ಲ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿಟ್ಲ ಕೆನರಾ ಬ್ಯಾಂಕ್ ಸಮೀಪ ನಿವಾಸಿ ಸಪ್ರಿಲ್ ಯಾನೆ ಚಪ್ಪಿ (೨೭) ಬಂಧಿತ. ಇಬ್ಬರ ತಂಡ ಎನ್ ಎಸ್ ಕೋರೆಗೆ ನುಗ್ಗಿ ಮ್ಯಾನೇಜರ್ ಗೆ ಬೆದರಿಕೆ ಹಾಕಿದ್ದು, ಅಲ್ಲದೇ ಮಾಲಕನಿಗೆ ಕರೆ ಮಾಡಿ, ಪಾಲುದಾರಿಕೆ ನೀಡಬೇಕು ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು.
- Advertisement -
ಪುತ್ತೂರು ತಾಲೂಕಿನ ಪಡವನ್ನೂರು ಗ್ರಾಮದ ಪುಂಡಿಕಾಯ ನಿವಾಸಿ ಎನ್. ಎಸ್. ಅಬ್ದುಲ್ ಕುಂಞ ಅವರು ನೀಡಿದ ದೂರಿನಂತೆ ವಿಟ್ಲ ಠಾಣೆಯಲ್ಲಿ ಬ್ಲೇಡ್ ಸಾಧಿಕ್, ಆತನ ಸಹೋದರ ಸಪ್ರೀಲ್ ಮತ್ತು ಇನ್ನೊಬ್ಬನ ಮೇಲೆ ಪ್ರಕರಣ ದಾಖಲಾಗಿತ್ತು.