ಉಪ್ಪಿನಂಗಡಿ: ಸತ್ತ ಎರಡು ಬೃಹತ್ ಕೋಣಗಳನ್ನು ಹಳೆಗೇಟು ಬಳಿಯ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬದಿ ಎಸೆದು ಹೋದ ಘಟನೆ ಆದಿತ್ಯವಾರ ಪತ್ತೆಯಾಗಿದೆ.
ಸುಮಾರು ಒಂದೊಂದು ಕೋಣವನ್ನು ರಸ್ತೆ ಬದಿಯ ಕುರುಚಲು ಪೊದೆಗೆ ಎಸೆಯಲಾಗಿದೆ. ಅಕ್ರಮವಾಗಿ ಜಾನುವಾರು ಸಾಗಾಟಗಾರರು ಜಾನುವಾರು ಸಾಗಿಸುತ್ತಿದ್ದಾಗ ಸತ್ತಿರಬಹುದಾದ ಕೋಣಗಳನ್ನು ಇಲ್ಲಿ ಎಸೆಯಲಾಗಿರಬಹುದೆಂದು ಶಂಕಿಸಲಾಗಿದೆ.
ವಿಷಯ ತಿಳಿದು ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ಬಳಿಕ ಇವುಗಳನ್ನು ಸ್ಥಳದಿಂದ ವಿಲೇವಾರಿ ಗೊಳಿಸಲಾಯಿತು.
ಗೋ ಹತ್ಯೆ, ಅಕ್ರಮ ಸಾಗಾಟ ನಿಷೇಧವಿದ್ದರೂ, ಕಠಿಣ ಕಾನೂನು ಜಾರಿಯಲ್ಲಿದ್ದರೂ, ಅಕ್ರಮ ಗೋ ಸಾಗಾಟ ನಿಂತಿಲ್ಲ. ಅಮಾನವೀಯವಾಗಿ ವಾಹನದಲ್ಲಿ ತುಂಬಿಸಿ ಅಕ್ರಮವಾಗಿ ಗೋ ಸಾಗಾಟ ನಡೆಸುವವರಿಂದಲೇ ಈ ಕೃತ್ಯವಾಗಿದೆ. ಆದ್ದರಿಂದ ಇವರನ್ನು ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಪೊಲೀಸರು ಚೆಕ್ ಪೋಸ್ಟ್ ಗಳಲ್ಲಿ ವಾಹನಗಳ ತಪಾಸಣೆ ನಡೆಸಿ, ಅಕ್ರಮ ಗೋ ಸಾಗಾಟ ಕ್ಕೆ ಕಡಿವಾಣ ಹಾಕಬೇಕು ಎಂದು ಹಿಂದೂ ಜಾಗರಣಾ ವೇದಿಕೆ ಆಗ್ರಹಿಸಿದೆ.