Home ನಿಮ್ಮ ಅಂಕಣ ವಿರೋಧಿಗಳ ಬಣದವಿಷಕಾರಿದ ಎಂಎಲ್ಸಿವಿಶ್ವನಾಥನ ಒಣಮಾತು

ವಿರೋಧಿಗಳ ಬಣದ
ವಿಷಕಾರಿದ ಎಂಎಲ್ಸಿ
ವಿಶ್ವನಾಥನ ಒಣಮಾತು

ಲೇಖನ: ಪಂಚನಹಳ್ಳಿ ಜಿ. ದಯಾನಂದಸಾಗರ ಮೂರ್ತಿ

- Advertisement -

ಭಾರತೀಯ ಜನತಾ ಪಕ್ಷದ ಎಂ.ಎಲ್.ಸಿ. ಆಗಿರುವ ಹಳ್ಳಿ ಹಕ್ಕಿ ವಿಶ್ವನಾಥ್ ಗೆ ನೀತಿ ನಿಯತ್ತು ಇದ್ದ0ತೆ ಕಾಣುತ್ತಿಲ್ಲ ಎಂದು ಬಿ ಎಸ್ ವೈ ಬೆಂಬಲಿಗರು ಮಾತನಾಡಿ ಕೊಳ್ಳುತ್ತಿದ್ದಾರೆ. ಅಲಗೂರು ಹೆಚ್. ವಿಶ್ವನಾಥ್ ವಿದ್ಯಾವಂತರು ಮತ್ತು ಬುದ್ಧಿವಂತರು. ಇವರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲಿ ಇರುವುದಕ್ಕೆ ಲಾಯಕ್ಕು. ಇವರನ್ನು ಮುಖ್ಯಮಂತ್ರಿ ಯಡಿಯೂರಪ್ಪರು ಬಿಜೆಪಿ ಕರೆ ತಂದು ಎಂ.ಎಲ್.ಸಿ. ಮಾಡಿ ದೊಡ್ಡ ತಪ್ಪು ಮಾಡಿದರು. ಇವರು ಬಿಜೆಪಿ ಪಕ್ಷದಲ್ಲಿ ದೈಹಿಕವಾಗಿ ಇದ್ದರೂ ಸಹ, ಮಾನಸಿಕವಾಗಿ ಕುಲಬಾಂಧವರಾದ ರಾಜಕಾರಣಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿಯ ಕೆ.ಎಸ್. ಈಶ್ವರಪ್ಪರ ಜೊತೆ ವೈಯಕ್ತಿಕವಾಗಿ ಉತ್ತಮ ವಿಶ್ವಾಸ ಇಟ್ಟುಕೊಂಡಿದ್ದಾರೆ. ಈ ಇವರುಗಳು ಮೇಲ್ನೋಟಕ್ಕೆ ಜನರ ಕಣ್ಣಿಗೆ ಶತ್ರುಗಳಂತೆ ಕಿತ್ತಾಡಿಕೊಂಡರೂ ಸಹ. ಪರಸ್ಪರ ಆಪ್ತ ಮಿತ್ರರು.

- Advertisement -

ವಿಶ್ವನಾಥ ಬಿಜೆಪಿಯಲ್ಲೇ ಇದ್ದುಕೊಂಡು ತಮಗೆ ಬಿಜೆಪಿಯಲ್ಲಿ ರಾಜಕೀಯ ಜನ್ಮ ನೀಡಿದ ಬಿಎಸ್ ವೈ ವಿರುದ್ಧ ವಿಷಕಾರುತ್ತಿದ್ದಾರೆ. ಇವರ ತಮ್ಮ ಕುಲಬಾಂಧವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಲಿ ಎಂದು ಕಾಂಗ್ರೆಸ್ ಪಕ್ಷದ ಜೊತೆ ಗುಪ್ತವಾಗಿ ಕೈ ಜೋಡಿಸಿದ್ದಾರೆ. ಈಗಾಗಲೇ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ಸಿದ್ದರಾಮಯ್ಯ ಜೊತೆ ಬಹಿರಂಗವಾಗೆ ಕೈ ಜೋಡಿಸಿದಂತೆ ವರ್ತಿಸುತ್ತಿದ್ದಾರೆ. ಈ ಮೂಲಕ ಬಿ ಎಸ್ ವೈ ಅವರನ್ನು ಬದಲಿಸಿ ವೀರಶೈವ ಲಿಂಗಾಯತ ಸಮುದಾಯದ ಪಂಚಮಸಾಲಿ ಲಿ0ಗಾಯತರನ್ನು ಮುಖ್ಯಮಂತ್ರಿ ಮಾಡಿ ಎಂದು ಇಂದು ಮಾಧ್ಯಮದ ಮುಂದೆ ಬಹಿ ರಂಗವಾಗಿ. ಹೇಳಿದ್ದಾರೆ.

- Advertisement -

ಬಹಳ ಬುದ್ಧಿವಂತಿಕೆಯಿಂದ ಯಡಿಯೂರಪ್ಪ ರಾಜ್ಯದಲ್ಲಿ
ಬಿಜೆಪಿ ಪಕ್ಷ ಕಟ್ಟುವುದಕ್ಕೆ ತಳಮಟ್ಟದಿಂದ ಶ್ರಮಿಸಿದ್ದಾರೆ. ಅವರ ಬಗ್ಗೆ ಗೌರವ ಇದೆ. ಆದರೆ ಅವರ ಕುಟುಂಬದ ಹಸ್ತಕ್ಷೇಪದಿಂದ ರಾಜ್ಯದ ಆಡಳಿತ ಯಂತ್ರ ಕುಸಿದಿದೆ. ಇದೆ ರೀತಿ ಇನ್ನು 2 ವರ್ಷ ಬಿ ಎಸ್ ವೈ ಮುಖ್ಯಮಂತ್ರಿ ಆಗಿ ಮುಂದುವರೆದರೆ ರಾಜ್ಯದ ಜನ ಬಿಜೆಪಿಗೆ ಬೆಂಬಲಿಸಲ್ಲ, ಬಿಜೆಪಿ ಸರ್ವನಾಶವಾಗುತ್ತದೆ ಎಂದು ಈ ಮೊದಲೇ ಬಿಎಸ್ ವೈ ವಿಠೋಧಿಗಳು ರೆದಿಮಾಡಿದ್ದ ಪಾಠವನ್ನೇ ಮಾಧ್ಯಮದ ಮುಂದೆ ಒದರಿದ್ದಾರೆ.

ನಿನ್ನೆ ಮೊನ್ನೆ ಬಿ ಎಸ್ ವೈ ಸಹಾಯದಿಂದ ಬಿಜೆಪಿಗೆ ಬಂದಿರುವ ವಿಶ್ವನಾಥ್ ಗೆ ಬಿ ಎಸ್ ವೈ ಬದಲಿಸಿ ಎಂದು ಪರೋಕ್ಷವಾಗಿ ಹೇಳಿರುವುದರಿಂದಲೇ ಬಿ ಎಸ್ ವೈ ಬೆಂಬಲಿಗರು ನಿಯತ್ತಿಲ್ಲದ ರಾಜಕಾರಣಿ ಹೆಚ್. ವಿಶ್ವನಾಥ್ ಎಂದು ಹೇಳುತ್ತಿದ್ದಾರೆ. ಈತನಿಗೆ ನಿಯತ್ತಿದ್ದರೆ ಜೆಡಿಎಸ್ ಅಧ್ಯಕ್ಷ ಸ್ಥಾನ ಕೊಟ್ಟಿದ್ದರೂ ಸಲ್ಲದ ನೆಪ ಹೇಳಿ ಬಿಜೆಪಿ ಬಂದಿದ್ದು.

ಇವರಿಗೆ ಅವರ ವಿಧಾನಸಭಾ ಕ್ಷೇತ್ರದಲ್ಲಿ ಬಹುಸಂಖ್ಯೆಯ ಮತದಾರರ ಬೆಂಬಲ ಇಲ್ಲದಿದ್ದ ಕಾರಣದಿಂದ ಸೋತರು. ಆದರೂ ಬಿ ಎಸ್ ವೈ ಈ ನಿಯತ್ತಿಲ್ಲದ ವ್ಯಕ್ತಿಯನ್ನು ಬಿಜೆಪಿಯ ಉಭಯ ಬಣಗಳ ವಿರೋಧದ ನಡುವೆಯೂ ಎಂ ಎಲ್ ಸಿ ಮಾಡಿದರು. ಆದರೆ ಬಿ ಎಸ್ ವೈ ಜೆಡಿಎಸ್ ನ ಅಪ್ಪ ಮಕ್ಕಳ ಮಾತು ಕೇಳಿಕೊಂಡು ತಮ್ಮನ್ನು ಮಂತ್ರಿ ಮಾಡಲಿಲ್ಲ ಎಂಬ ಸಿಟ್ಟಿಗೆ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಬದಲಾಗಬೇಕು ಎಂದು ತಮಗೆ ಬಿಜೆಪಿಯಲ್ಲಿ ರಾಜಕೀಯ ಜೀವ ಕೊಟ್ಟ ಬಿ ಎಸ್ ವೈ ವಿರುದ್ಧ ಜಾಣತನದಿಂದಲೇ ತಿರುಗಿ ಬಿದ್ದಿದ್ದಾರೆ.

ಇವರು ಬಿ ಎಸ್ ವೈ ಗೆ ವಯಸ್ಸಾದ ಕಾರಣ ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಶಕ್ತಿ ಇಲ್ಲ ಎನ್ನುತ್ತಿದ್ದಾರೆ. ಆದರೆ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ಬಿಎಸ್ ವೈ ಮೇಲಿನ ದ್ವೇಷಕ್ಕೆ ವಿಶ್ವನಾಥ್ ಈ ರೀತಿ ವಿಷಕಾರುತ್ತಿದ್ದಾರೆ. ನಾವು ವಿಶ್ವನಾಥ್ ಗೆ ಸವಾಲ್ ಹಾಕುತ್ತೇವೆ. ಹೈ ಕಮಾ0ಡ್ ಅಸ್ತು ಎಂದರೆ ಮುಂದಿನ ಬಾರಿಯೂ ಬಿ ಎಸ್ ವೈ ಮುಖ್ಯಮಂತ್ರಿ ಆಗಿ ಆಡಳಿತ ನಡೆಸಲು ಸಮರ್ಥರಾಗಿದ್ದಾರೆ. ಅಲ್ಲದೆ ಬಿ ಎಸ್ ವೈ ಇಲ್ಲದೆ ವಿಶ್ವನಾಥ್ ಪರೋಕ್ಷವಾಗಿ ಹೇಳಿರುವ ಪಂಚಮಸಾಲಿ ಸಮಾಜದ ಬೆಲ್ಲದ ಅಥವಾ ಯತ್ನಾಳ್ ಅವರನ್ನು ಮುಂದಿಟ್ಟುಕೊಂಡು ಹೋಗಿ 30 ಸ್ಥಾನ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲ.

ಆದ್ದರಿಂದ ಒಂದು ವೇಳೆ ಬಿ ಎಸ್ ವೈ ವಿರೋಧಗಆದ ವಿಶ್ವನಾಥ್, ಯತ್ನಾಳ್, ಬೆಲ್ಲದ, ಯೋಗೀಶ್ವರ,ವಿ ಜೋಧಿ ಹೇಳಿದಂತೆ ಹೈ ಕಮಾ0ಡ್ ಕೇಳಿ ಯಡಿಯೂರಪ್ಪರನ್ನು ಬದಲಿಸಲು ಮುಂದಾದರೆ ಮು0ದೆ ಸಂಭವಿಸಬಹುದಾದ ಅನಾಹುತಕ್ಕೆ ಅವರೇ ಕಾರಣರು ಎಂದು ಎಚ್ಚರಿಕೆಯ ಸ0ದೇಶ ನೀಡಲು ಸಜ್ಜಾಗಿದ್ದಾರೆ.

- Advertisment -

Most Popular